Mansukada Mansuni Akaska Song Lyrics

ಸುಬ್ಬಿ ಸುಬ್ಬಕ್ಕ ಸುವ್ವಲಾಲಿ(1980) - ಮಸುಕಾದ ಮನಸಿನ ಆಕಾಸಕೆ

ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್.ಪಿ.ಬಿ


ಮಸುಕಾದ ಮನಸಿನ ಆಕಾಸಕೆ
ಮಿಂಚುವ ಚುಕ್ಕಿಯಂಗೆ ನಾ ಬಂದೆ.ಎ.ಎ.ಎ

ಮಸುಕಾದ ಮನಸಿನ ಆಕಾಸಕೆ
ಮಿಂಚುವ ಚುಕ್ಕಿಯಂಗೆ ನಾ ಬಂದೆ
ತುಂಬಿ ಬಂದ ಹರೆಯದ ಅಂಗಳದಾಗೆ
ತಿಂಗಳ ಬೆಳಕಿನಾಂಗೆ ನೀ ಬಂದೆ

ಮಸುಕಾದ ಮನಸಿನ ಆಕಾಸಕೆ.ಎ.ಎ.ಎ

ಬಿರಿದು ನಿಂತ ಭೂಮಿಗೆ ಭರಣಿ ಮಳೆ ಬಂದ್ ಹಾಂಗೆ
ಬರಿದಾದ ಹೃದಯಕೆ ಪ್ರೀತಿ ಗಂಗೆ ನಾ ತರುವೆ
ಎಂದೆಂದು ನೊಂದು ಬೆಂದ ಬಾಳಿನಾಗೆ
ಎಂದೆಂದು ನೊಂದು ಬೆಂದ ಬಾಳಿನಾಗೆ
ಸೊಂಪು ನೀಡಿ ಜೀವಕ್ಕೆ ತಂಪು ತಂದು ಕೊಡುವೀ ಏ.ಎ.ಎ.ಎ

ಮಸುಕಾದ ಮನಸಿನ ಆಕಾಸಕೆ.ಎ.ಎ.ಎ


ಬಂಜಾರದ ಹೊಲದಾಗೆ ತುಂಭೆ ಹೂ ಅರಳಿದಾಂಗೆ
ನೋವನುಂಡ ಒಡಲಿಗೆ ಜಾಜಿ ತಂಪು ಬೀರುವೆ
ಹಾಳಾಗಿ ಬೀಳು ಬಿದ್ದ ತೋಟದಾಗೆ
ಹಾಳಾಗಿ ಬೀಳು ಬಿದ್ದ ತೋಟದಾಗೆ
ಎಳೆಯ ಬಾಳೆ ಮೂಡೋ ಹಾಂಗೆ ಆಸೆ ನೀಡುವೇ ನಾ..ಆ..ಆ

ಮಸುಕಾದ ಮನಸಿನ ಆಕಾಸಕೆ.ಎ.ಎ.ಎ

ಯಾರು ಏನೇ ಅಂದರು ಕಾಡಾನೆ ನಡೆದ್ ಹಾಂಗೆ
ಬದುಕಿನ ಹಾದಿಯಾಗೆ ಹೆದರ್ಧಾಂಗೆ ನಡೆವೆ
ಯಾವತ್ತು ಜೊತೆ ಬಿಟ್ಟು ಹೋಗದ್ ಹಾಂಗೆ
ಯಾವತ್ತು ಜೊತೆ ಬಿಟ್ಟು ಹೋಗದ್ ಹಾಂಗೆ
ಪುಟ್ಟಂಪುಳ್ಳೆ ಅಂಟ್ಕೊಂಢಂಗೆ ಅಂಟಿಕೊಳ್ಳುವೇ ನಾ..ಆ.ಆ.ಆ

ಮಸುಕಾದ ಮನಸಿನ ಆಕಾಸಕೆ
ಮಿಂಚುವ ಚುಕ್ಕಿಯಂಗೆ ನಾ ಬಂದೆ
ತುಂಬಿ ಬಂದ ಹರೆಯದ ಅಂಗಳದಾಗೆ
ತಿಂಗಳ ಬೆಳಕಿನಾಂಗೆ ನೀ ಬಂದೆ

ಮಸುಕಾದ ಮನಸಿನ ಆಕಾಸಕೆ.ಎ.ಎ.ಎ



*** Kannda Song Lyrics ***

Naa Neena Kadaga Song Lyrics

ಮಹಾಪ್ರಚಂಡರು(1981) - ನಾ ನಿನ್ನ ಕಂಡಾಗ

ಸಂಗೀತ: ಉಪೇಂದ್ರ ಕುಮಾರ್
ಗಾಯನ: ಎಸ್.ಪಿ.ಬಿ


ನಾ ನಿನ್ನ ಕಂಡಾಗ ಹಾಡೊಂದು ಮೈದೋರಿ ಬಂತೂ
ನಾ ನಿನ್ನ ಕಂಡಾಗ ಹಾಡೊಂದು ಮೈದೋರಿ ಬಂತೂ
ಕವಿ ಮಾಡಿತೆನ್ನ ಈ ಗೀತೆ ನನ್ನಲ್ಲಿ ತಂದು
ಪ್ರಿಯೆ ಈ ರಾಗ ಚಂದ ಈ ತಾಳ ಚಂದ
ನೀ ತಂದೆ ಈ ಬಾಳಿಗಂದ
ಓ ಪ್ರಿಯೆ ಓ ಪ್ರಿಯೆ ಓ ಪ್ರಿಯೆ

ಚೆಲುವಿನ ದೇವಾಲಯ ಮೊಗದಲಿ ಕಂಡೆ
ಒಲವಿನ ಆರಾಧನೆ ನಗುವಲಿ ಕಂಡೆ
ಅನುಭವ ವಿನೂತನ ಮನದಲಿ ಕಂಡೆ
ನಿನ್ನಿಂದ ಈ ನನ್ನ ಬಾಳೆಲ್ಲಾ ಹೂವಾಯಿತಿಂದೂ
ನಿನ್ನಿಂದ ಈ ನನ್ನ ಬಾಳೆಲ್ಲಾ ಹೂವಾಯಿತಿಂದೂ
ಇರುಳೆಲ್ಲಾ ನೀಗಿ ಮುಂಜಾನೆ ತಾ ಮೂಡಿ ಬಂತೂ
ಪ್ರಿಯೆ ಈ ರಾಗ ಚಂದ ಈ ತಾಳ ಚಂದ
ನೀ ತಂದೆ ಈ ಬಾಳಿಗಂದ
ಓ ಪ್ರಿಯೆ ಓ ಪ್ರಿಯೆ ಓ ಪ್ರಿಯೆ

ತನುವಿನ ಕಣಾ ಕಣಾ ನಿನ್ನದೆ ಅಂದ
ಸೆಳೆದಿದೆ ನನ್ನ ನಿನ್ನ ಯವುದೋ ಬಂಧ
ಬೆರೆಸಿದೆ ಮನ ಮನ ಪ್ರೀತಿಯ ಸ್ಪಂದಾ
ಒಂದಂತೆ ನಾವಿಂದು ಬೆರೆತಂತೆ ಆ ಗಾಳಿ ಗಂಧ
ಒಂದಂತೆ ನಾವಿಂದು ಬೆರೆತಂತೆ ಆ ಗಾಳಿ ಗಂಧ
ಹೊಸ ಜೀವ ಕಂಡೆ ನೀ ತಂದ ಈ ಪ್ರೇಮದಿಂದ
ಪ್ರಿಯೆ ಈ ರಾಗ ಚಂದ ಈ ತಾಳ ಚಂದ
ನೀ ತಂದೆ ಈ ಬಾಳಿಗಂದ
ಓ ಪ್ರಿಯೆ ಓ ಪ್ರಿಯೆ ಓ ಪ್ರಿಯೆ

*** Kannada Old Song Lyrics ***

Edhaga Nee Dhorada Song Lyrics

ಸಂಶಯಫಲ(1970) - ಇದೀಗ ನೀ ದೂರಾದೆ

ಸಂಗೀತ: ಸಲಿಲ್ ಚೌಧರಿ
ಗಾಯನ
: ಪಿ. ಸುಶೀಲ, ಪಿ.ಬಿ.ಎಸ್

ಇದೀಗ ನೀ ದೂರಾದೆ
ಇದೀಗ ನೀ ದೂರಾದೆ
ಸುವಾಸಿನಿ ಹೆಣ್ಣಾದೆ
ನಡಿ ಮುಂದೆ
ನಿನ್ನ ಸುಖ ಬೇರೆ ಮುಖ
ನಡಿ ಮುಂದೆ
ನಿನ್ನ ಸುಖ ಬೇರೆ ಮುಖ ... ೨

ತವರಿನ ಋಣ ತೀರಿತಿಲ್ಲೆ
ಹರಿಯಿತು ಹಳೆ ಬಾಲ ಲೀಲೆ
ಅರಳಿತು ಹೊಸ ಬಾಳ ಲೀಲೆ
ಅರಿಶಿಣ ಹಸಿ ಆಗುವಲ್ಲೆ
ಕಾದಿದೆ ಹೊಣೆ ಸಾಲು ಸಾಲೆ
ಮಾವನ ಮನೆ ಕೀರ್ತಿ ಮಾಲೆ
ಹಾಲು ಹೊಳೆ ಜೇನು ಮಳೆ
ಸುಖ ಸಂಸಾರದ ಸಂಭ್ರಮ

ನಡಿ ಮುಂದೆ
ನಿನ್ನ ಸುಖ ಬೇರೆ ಮುಖ

ಒಣ ಶಂಕೆ ಶೋಖ
ಕಾಣದು ಕಡೆ ತನಕ
ಒಣ ಶಂಕೆ ಶೋಖ
ಕಾಣದು ಕಡೆ ತನಕ
ತೊರೆ ನೀ ಒಳ ವೇಧನೆ
ಮರೆತೀ ಮನೆ
ಸರಿ ಸುಮ್ಮನೆ
ಮನೆಯ ಸುಖಿ ಸುಲಭ ಲತೆ ಕಾವ ಲತೆ
ನಡಿ ಮುಂದೆ
ನಿನ್ನ ಸುಖ ಬೇರೆ ಮುಖ
ನಡಿ ಮುಂದೆ
ನಿನ್ನ ಸುಖ ಬೇರೆ ಮುಖ


*** Kannnda Song Lyrics ***

Vesha Haki Song Lyrics

ಮತ್ಸರ(1990) - ವೇಷಾ ಹಾಕಿ

ಸಂಗೀತ: ಸಂಗೀತ ರಾಜ


ಸಂಗಡಿಗರು: ಯೇ ಬಂದನೋ ಸ್ವಾಮಿ ಬಂದನೋ
ತಂದನೋ ಬೆಳಕ ತಂದನೋ
ಈ ಭೂತಾಯಿ ಮೈದುಂಬಿ
ಹೊಸ ಬೆಳೆಯನ್ನು ತಂದಾಳೋ
ಸುಗ್ಗಿಯೂ ಚಂದಾಗಿ ಸಂತೋಷಾ ತುಂಬೈತೋ ಹೊಯ್

ಚಿತ್ರ: ವೇಷಾ ಹಾಕಿ ಮೀಸೆ ತೀಡಿ
ತಿನ್ನೋ ಹಾಗೆ ನನ್ನ ನೋಡಿ
ನನ್ನ ಸೆರಗು ಹಿಡಿದು ನೆರಳಿನಂತೆ ಬಂದೆ ಯಾಕೋ ?
ನನ್ನ ಎದೆಯ ಕಲಕಿ ಗಾಳ ಹಾಕಿ ನಿಂತೆ ಯಾಕೋ ?

ಎಸ್.ಪಿ.ಬಿ: ರಾಣಿಯಂಗೆ ಕೊಂಕು ಮಾಡಿ ಅಂಕೆ ಮೀರಿ ಹೊಯ್ ಬಿಂಕ ತೋರಿ
ನನ್ನ ಮರುಳು ಮಾಡಿ ಆಸೆ ಕೆಣಕಿ ಬಂದೆ ಯಾಕೆ ?
ನನ್ನ ಕಾಡಿ ಕಾಡಿ ಹುಚ್ಚು ಹಿಡಿಸಿ ನಿಂತೆ ಯಾಕೆ ?

ಹಾ ತಂದನಾನಿ ತಾನೇನಾನೆ ತಂದನಾನಿ ತಾನೇನಾನೆ
ತಂದನಾನಿ ತಾನೇನಾ ತಾನೇನಾನಿ ತಾನೇನಾ
ಹೋ ತಾನೆನಾನೆನಾನೆನಾ ತಾನನೆನಾ ತಾನನಾ

ಸಂಗಡಿಗರು: ಮುಂಗಾರ ಮಳೆ ಬಂದು ಸಿಂಗಾರ ಸಿರಿ ತಂತು
ರೈತಾಪಿ ಜನರೆಲ್ಲ ಹಿಗ್ಗಿನಾ ಹೊಳೆ ಆತೋ ಹೊಯ್

ಎಸ್.ಪಿ.ಬಿ: ಮೀನಾ ಕಣ್ಣ ಸಿಂಗಾರಿ ಹುಡುಗಿ
ಹೋಯ್ ತೊಂಡೆ ತುಟಿಯ ಬಂಗಾರಿ ಬೆಡಗಿ
ಅರೆ ಕೀಟ್ಲೆ ಮಾಡೊ ತುಡುಗಿ ನಿನ್ನ ರೂಪ ಬೆಡಗಿ
ಹೋಯ್ ನನ್ನ ಪ್ರಾಯ ಮಿಂಚೈತೆ ನಿನ್ನ ಚೆಲುವು ಕರೆದೈತೆ

ತಂದಾನ ತಂದಾನ ತಂದನಾನಾ
ತಂದಾನ ತಂದಾನ ತಂದನಾನೋ

ಸಂಗಡಿಗರು: ಒಲಿದಾಳೊ ನಮ್ಮಮ್ಮ ನಮ್ಮೂರ ಮಾರಮ್ಮ
ಹರ್ಸ್ಯಾಳೊ ನಮ್ಮಮ್ಮ ಮಾತಾಯಿ ನಮ್ಮಮ್ಮ ಹೊಯ್

ಚಿತ್ರ: ಗತ್ತು ತೋರೋ ಹಮ್ಮೀರ ಶೂರ ಹಾ ಮನಸ ಕದ್ದ ನಮ್ಮೂರ ಧೀರ
ನಿನ್ನ ನಿಲುವು ಸೆಳೆದು ಪ್ರೀತಿ ಪೂರಾ ಬೆಳೆದು
ಹಾ ನಿನ್ನ ಸಂಗ ಬೇಡೈತೆ ನನ್ನ ಆಸೆ ಚಿಗುರೈತೆ

ತಂದಾನಾ ತಂದಾನಾ ತಂದನಾನಾ
ತಂದಾನಾ ತಂದಾನಾ ತಂದನಾನಾ

ಎಸ್.ಪಿ.ಬಿ: ಒಯೊಯೊಯ್ ರಾಣಿಯಂಗೆ ಕೊಂಕು ಮಾಡಿ ಅಹಾ ಅಂಕೆ ಮೀರಿ ಅಯ್ಯೊ ಬಿಂಕ ತೋರಿ
ನನ್ನ ಮರುಳು ಮಾಡಿ ಆಸೆ ಕೆಣಕಿ ಬಂದೆ ಯಾಕೆ ?

ಚಿತ್ರ: ನನ್ನ ಎದೆಯ ಕಲಕಿ ಗಾಳ ಹಾಕಿ ನಿಂತೆ ಯಾಕೋ ?

ಸಂಗಡಿಗರು: ಯೇ ಬಂದನೋ ಸ್ವಾಮಿ ಬಂದನೋ
ತಂದನೋ ಬೆಳಕ ತಂದನೋ
ಈ ಭೂತಾಯಿ ಮೈದುಂಬಿ
ಹೊಸ ಬೆಳೆಯನ್ನು ತಂದಾಳೋ
ಸುಗ್ಗಿಯೂ ಚಂದಾಗಿ ಸಂತೋಷಾ ತುಂಬೈತೋ ಹೊಯ್


*** Kannada Song Lyrics ***

Nayana thumbi Neeadha Song Lyrics

ಸೇಡಿನ ಹಕ್ಕಿ(1985) - ನಯನದ ತುಂಬಾ ನಿನ್ನದೆ ಬಿಂಬಾ

ಸಂಗೀತ: ರಾಜನ್ ನಾಗೇಂದ್ರ

ಎಸ್.ಜೆ ನಯನದ ತುಂಬಾ ನಿನ್ನದೆ ಬಿಂಬಾ
ನೆಲೆಸಿದೆ ಹಗಲಿರುಳೆಲ್ಲಾ
ನೀ ಸೆಳೆದಿಹೆ ತನು ಮನವೆಲ್ಲಾ
ನೆನಪುಗಳಾ ಅಲೆಯಲಿ ತೇಲಿ
ಹಾಡುವೆ ನಾ ಅನಂದದಲ್ಲಿ

ನಯನದ ತುಂಬಾ ನಿನ್ನದೆ ಬಿಂಬಾ
ನೆಲೆಸಿದೆ ಹಗಲಿರುಳೆಲ್ಲಾ
ನೀ ಸೆಳೆದಿಹೆ ತನು ಮನವೆಲ್ಲಾ

ಎಸ್.ಪಿ.ಬಿ ಎದೆ ಮಾತು ತುಟಿ ಮೇಲೆ ಬಾರದ ಸಮಯಾ
ತಳಮಳ ಒಳಗೆ ಕಿರು ನಗೆ ಹೊರಗೆ ತಾಳದು ಜೇವವು ಈ ಬೇಗೆ

ಎಸ್.ಜೆ ಕುಡಿ ನೋಟ ಈ ಮೌನಾ ಅರಿವುದು ಹೃದಯಾ
ಉಸಿರಲಿ ಬೆರೆವ ಜಗವನೆ ಮರೆವ
ಮೈ ಮನ ಸೇರಿ ಸುಖ ಪಡೆವ

ಎಸ್.ಪಿ.ಬಿ ಬಾಳ ದಾರಿಗೆ ಹೂವ ಹಾಸಿಗೆ
ಬಾಳ ದಾರಿಗೆ ಹೂವ ಹಾಸಿಗೆ ನೀ ತಂದೇ
ನಯನದ ತುಂಬಾ ನಿನ್ನದೆ ಬಿಂಬಾ
ನೆಲೆಸಿದೆ ಹಗಲಿರುಳೆಲ್ಲಾ
ನೀ ಸೆಳೆದಿಹೆ ತನು ಮನವೆಲ್ಲಾ

ಎಸ್.ಜೆ ನಯನದ ತುಂಬಾ ನಿನ್ನದೆ ಬಿಂಬಾ
ನೆಲೆಸಿದೆ ಹಗಲಿರುಳೆಲ್ಲಾ
ನೀ ಸೆಳೆದಿಹೆ ತನು ಮನವೆಲ್ಲಾ

ರಾಜ್ಕುಮಾರ್ ಭಾರತಿ ಧರೆಯೆಲ್ಲ ಚೆಲುವಿಂದ ತುಂಬಿದ ಸಮಯ
ಇನಿಯಳ ಜೊತೆಯ ಬಯಸಿದೆ ಹೃದಯ
ಕುಣಿದಿದೆ ಗೆಳತಿ ದೊರೆತಾಗ

ಎಸ್.ಜೆ ಬೇಕೆಂದೆ ನಿನಗಾಗಿ ಅರಸುತ ಬಂದೆ
ಕನಸಲೂ ನೀನೆ ಮನಸಲೂ ನೀನೇ
ತೀರದ ಹರುಷ ನನಗೀಗ

ರಾಜ್ಕುಮಾರ್ ಭಾರತಿ ನಿನ್ನ ಪ್ರೇಮವೇ ನನ್ನಾ ಬಾಳಿನಾ
ನಿನ್ನ ಪ್ರೇಮವೇ ನನ್ನಾ ಬಾಳಿನಾ ಸಂಗೀತಾ

ನಯನದ ತುಂಬಾ ನಿನ್ನದೆ ಬಿಂಬಾ
ನೆಲೆಸಿದೆ ಹಗಲಿರುಳೆಲ್ಲಾ
ನೀ ಸೆಳೆದಿಹೆ ತನು ಮನವೆಲ್ಲಾ

ಎಸ್.ಜೆ ನೆನಪುಗಳಾ ಅಲೆಯಲಿ ತೇಲಿ
ಹಾಡುವೆ ನಾ ಅನಂದದಲ್ಲಿ
ನಯನದ ತುಂಬಾ ನಿನ್ನದೆ ಬಿಂಬಾ
ನೆಲೆಸಿದೆ ಹಗಲಿರುಳೆಲ್ಲಾ
ನೀ ಸೆಳೆದಿಹೆ ತನು ಮನವೆಲ್ಲಾ

*** Kannada Song Lyrics ***

Shruthi Meeradhi Song Lyrics

ಶೃತಿ ಮೀರಿದ ಹಾಡು ಪ್ರೇಮ ಸುಳಿವ ಜಾಡು - ಬಿ.ಆರ್. ಲಕ್ಷ್ಮಣ್ ರಾವ್

ಶೃತಿ ಮೀರಿದ ಹಾಡು ಪ್ರೇಮ ಸುಳಿವ ಜಾಡು
ಅಂದು ಕನಸಿನರಸ ಇಂದು ಏನೋ ವಿರಸ
ಹಳಸಿತೆ ಆ ಒಲವು ತಳೆಯಿತೆ ಈ ನಿಲುವು

ಯಾರಿವಳೀ ಹುಡುಗಿ ಹೊಸ ಹರೆಯದ ಬೆಡಗಿ
ಸಾವಿನ ನಾಡಿನೊಳು ಜೀವ ರಸದ ಹೊನಲೂ

ಮಗುವಿನ ನಗೆಯವನು ಮಿಡಿಯುವ ಬಗೆಯವನು
ಬಾಗಿಲು ಬಡಿಯುವನು ಇಂದು ಯಾರೋ ಇವನು

ತೆರೆಗಳ ಮೊರೆತದಲಿ ಆಳದ ಮೌನದಲಿ
ಹೊರಳೋ ದಾರಿಗಳಲಿ ನನ್ನ ಮೂಕ ಅಳಲು
 
 *** Kannada Song Lyrics ***

Kaveri godavri Song Lyrics

ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ - ಸಾ.ಶಿ.ಮರುಳಯ್ಯಾ

ಕಾವೇರಿ ಗೋದಾವರಿ ಗಂಗೆ ಯಮುನೆ ಸಿಂಧುವೆ
ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ
ಸುಪ್ರಬೋಧ ಚಂದ್ರೋದಯ ರಾಗಾರುಣ ಜಾಲೆ
ಗಿರಿ ಸಿರಿ ವನ ಸಂಚಾರಿಣಿ ತುಂಗಾ ಜಲ ನೀಲೆ
ಕಲ ಕಲ ಕಲ ಮೆದುಹಾಸಲಿ ಗಾನ ಸುಪ್ತ ಲೋಲೆ

ಮಲೆನಾಡಿನ ಕೋಗಿಲೆಯೆ ಬಯಲುನಾಡ ಮಲ್ಲಿಗೆಯೆ
ವನ್ಯ ವಿಷಯ ಭೃಂಗವೆ ಧವಳ ಗಿರಿಯ ಶೃಂಗವೆ
ನಸು ನಸುರಿನ ಹಿಮ ಮಣಿಯೆ ಎಳೆ ಬಿಸಿಲಿನ ಮೇಲುದವೆ
ಬಿರಿದ ಮುಗುಳ ಬಿಂಕವೆ ತೆರೆದ ಸೋಗೆ ನರ್ತನವೆ
ನಿರ್ಭರಾ ನಿರ್ಜರಣಿಯ ಜಲಪಾತದ ಗಿರಿಗರ್ಜನೆಯೆ

*** Kannada Song Lyrics ***

Agegdu Oogedtha Song Lyrics

ಹೇಗಿದ್ದು ಹೇಗಾದೆಯೊ ಆತ್ಮ - ಕನಕದಾ

ಹೇಗಿದ್ದು ಹೇಗಾದೆಯೊ ಆತ್ಮ ಹೇಗಿದ್ದು ಹೇಗಾದೆಯೋ
ಯೋಗೀಶನ್ನಾನಂದಪುರದಲ್ಲಿರುವುದ ಬಿಟ್ಟು

ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದು ಗುಸುಗಾಡಿ ನುಡಿದು ನೆಲ ಬಟ್ಟೆ ಬಿಡಿದು
ಕಿಸುಕದರಿವೆಯ ಪೊದ್ದು ಮಲ ಮೂತ್ರದಲಿ ಬಿದ್ದು ವಸುಧೆಯಲಿ ದಿನಗಳೆದೆಯೋ ಆತ್ಮ

ಎಳಗೆರೆಯಲಾಡಿ ಯವ್ವನದ ಊರಿಗೆ ಬಂದು ತಳ ತಳಿಪ ಹಸ್ತಾದ್ರಿ ನೆಳಲ ಸೇರಿ
ಅಳಲುಸುತ ಬೆಳೆದು ದಾರಿದ್ರ್ಯ ಬೇಟೆಗೆ ಬಂದು ಹಳೆಯ ಬೀಡಿಗೆ ಪಯಣವೋ ಅತ್ಮ

ಗನ್ನಕತಕದ ಮಾತು ಇನ್ನು ನಿನಗೇತಕೊ ಮುನ್ನ ಮಾಡಿದ ಕರ್ಮ ಬರದೊಡಲಿದೆ
ಉನ್ನತದ ಕಾಗಿನೆಲೆ ಆದಿಕೇಶವ ಸುಪ್ರಸನ್ನ ಮೂರುತಿಯನ್ನು ಭಜಿಸಲೋ ಆತ್ಮ


*** Kannda Vachan  Song Lyrics ***

Hugala Kaleva Neenaga Song Lyrics

ಗಂಗೆ ಬಾರೆ ತುಂಗೆ ಬಾರೆ (2008) - ಹೂಗಳು ಕೇಳಿವೆ ನಿನಗೆ ಏನಾಗಿದೆ ?

ಸಂಗೀತ: ಸಾಧು ಕೋಕಿಲ


ಕುನಾಲ್: ಹೂಗಳು ಕೇಳಿವೆ ನಿನಗೆ ಏನಾಗಿದೆ ?
ಗಾಳಿಗು ಸಂಶಯ ವಿಷಯ ಏನೋ ಇದೆ

ನಂದಿತ: ಬುವಿ ಬಾನೂ ನೋಡುತಿದೆ

ಕುನಾಲ್: ಈ ಜೀವ ಕೂಗಿದೆ ನನಗೆ ಪ್ರೀತಿಯಾಗಿದೆ

ನಂದಿತ: ಹೂಗಳು ಕೇಳಿವೆ ನಿನಗೆ ಏನಾಗಿದೆ ?

ಕುನಾಲ್: ಗಾಳಿಗು ಸಂಶಯ ವಿಷಯ ಏನೋ ಇದೆ

ತೆರೆವ ಹೂವಿನಲೂ ನೀನೇ
ಉರಿವ ದೀಪದಲೂ ನೀನೇ
ಬರೆವ ಚಿತ್ರದಲೂ ನೀನೇ ತಾನೆ ಮೂಡಿರುವೆ

ನಂದಿತ: ಉಲಿವ ಹಕ್ಕಿಯಲೂ ನೀನೆ
ಸುಳಿವ ಚುಕ್ಕಿಯಲು ನೀನೇ
ಎಲ್ಲಾ ದಿಕ್ಕಿನಲೂ ನೀನೇ ತಾನೆ ಕಾಡಿರುವೆ

ಕುನಾಲ್: ಕೈ ಚಾಚಿ ನನ್ನ ಕರೆಯೊಮ್ಮೆ
ನಿನ್ನೆದೆಗೆ ಓಡಿ ಬರುವೆ

ನಂದಿತ: ನನ್ನುಸಿರೆ ನೀನು ಬರುವಾಗ ನನ್ನನ್ನೇ ನಾನು ಮರೆವೆ

ಕುನಾಲ್: ನನಗೆ ಪ್ರೀತಿ ಆಗಿದೆ
ಹೂಗಳು ಕೇಳಿವೆ ನಿನಗೆ ಏನಾಗಿದೆ ?

ನಂದಿತ: ಗಾಳಿಗು ಸಂಶಯ ವಿಷಯ ಏನೋ ಇದೆ

ಕುನಾಲ್: ಬುವಿ ಬಾನು ನೋಡುತಿದೆ

ನಂದಿತ: ಈ ಜೀವ ಕೂಗಿದೆ ನನಗೆ ಪ್ರೀತಿಯಾಗಿದೆ

ಕುನಾಲ್: ಏ..ಹೇ..ಹೇ..ಏ..ಏ

ಎಡವಿ ತೋಳಿನಲಿ ಬಾರೆ
ನಡುವೆ ಲಜ್ಜೆಯನು ತಾರೆ
ಕಡವಿ ಹೃದಯವನು ನೋಡೆ ಅಲ್ಲೆ ನೀನಿರುವೆ

ನಂದಿತ: ಅಧರ ಅದರುತಿದೆ ನೋಡು
ಅದರ ಮೌನವನು ಕೇಳು
ಮಧುರ ಸಂಕಟದ ಹಾಡಿನಲ್ಲಿ ಮೈ ಮರೆವೆ

ಕುನಾಲ್: ಸುಳ್ಳಲ್ಲ ಅಲ್ಲ ಈ ಕ್ಷಣವು
ನೀ ಹೇಳು ನೂರು ಸಾರಿ

ನಂದಿತ: ಕಣ್ಣಲ್ಲಿ ಜೀವ ಹಿಡಿದಿಟ್ಟು
ಹೌದೆನ್ನು ಒಂದೇ ಬಾರಿ

ಕುನಾಲ್: ಹೇ ನನಗೆ ಪ್ರೀತಿಯಾಗಿದೆ
ಹೂಗಳು ಕೇಳಿವೆ ನಿನಗೆ

ನಂದಿತ: ಏನಾಗಿದೆ ?

ಕುನಾಲ್: ಗಾಳಿಗು ಸಂಶಯ

ನಂದಿತ: ಏನೋ ಇದೆ

ಕುನಾಲ್: ಆಹಾ

ನಂದಿತ: ಬುವಿ ಬಾನು ನೋಡುತಿದೆ

ಕುನಾಲ್: ಓ..ಓ..ಓ..ಓ

ಇಬ್ರು: ಈ ಜೀವ ಕೂಗಿದೆ ನನಗೆ ಪ್ರೀತಿಯಾಗಿದೆ

*** Kannda Old Song Lyrics ***

Nanpugala Hangela Song Lyrics

ಬೆಳದಿಂಗಳ ಬಾಲೆ(1995) - ನೆನಪುಗಳ ಅಂಗಳದಿ

ಸಂಗೀತ: ಗುಣ ಸಿಂಗ್
ಗಾಯನ: ಚಂದ್ರಿಕ ಗುರುರಾಜ್

ನೆನಪುಗಳ ಅಂಗಳದಿ ನಿನ್ನ ನಗೆಯ ತುಂಬಿಕೊಂಡ ಬೆಳದಿಂಗಳು

ಸ್ಪಂದಿಸಿದೆ ಓ ಗೆಳೆಯ ನಿನ್ನ ಮನದ ಮಿಡಿತಕ್ಕೆ ಎಂದೊ ನಿನಗರಿಯದೆ
ಈ ಬಾಳ ಹಾದಿಯಲ್ಲಿ ನನ್ನ ಗುರಿಯಾದೆ ನೀನು
ನೀನಿರುವ ತಾಣದಲ್ಲಿ ಬರುವಾಸೆಯೊ
ದೂರದೊಂದು ಲೋಕದಿಂದ ನನಗಾಗಿ ಇಳಿದು ಬಂದು
ನನ್ನೆದೆಯ ಆಳದಲ್ಲಿ ನಿಂತವನು ನೀ
ನಾ ಹೇಗೆ ಹೇಳಲಿ ನಿನಗೆ ಮನದಾಳ ವೇಧನೆಯ
ಈ ಜೀವ ಭಾವವೆಲ್ಲಾ ನೀನಾದೆಯೊ

ನೆನಪುಗಳ ಅಂಗಳದಿ ನಿನ್ನ ನಗೆಯ ತುಂಬಿಕೊಂಡ ಬೆಳದಿಂಗಳು

ಹೇಗೊ ಏನೊ ನೀನು ತಂದೆ ಕನಸುಗಳ ಕಣ್ಣಲಿ ತಂದೆ
ಆಸೆಗಳ ಮನದಲ್ಲಿ ಎಲ್ಲಾ ಕಾಡಿವೆ
ಬಾಹುಗಳ ಬಂಧನದಲ್ಲಿ ಮುತ್ತುಗಳ ಸುರಿಮಳೆಯಲ್ಲಿ
ನನ್ನನ್ನೆ ಮರೆಯುವ ಆಸೆ ನೀ ತೀರಿಸೊ
ಅಧರ ಅಧರ ತಾ ಬೆರೆತು ಹೋಗಲಿ
ತನುವು ಮನವು ಸಮ್ಮಿಲನವಾಗಲಿ

ನೆನಪುಗಳ ಅಂಗಳದಿ ನಿನ್ನ ನಗೆಯ ತುಂಬಿಕೊಂಡ ಬೆಳದಿಂಗಳು

ನಾಳೆ ಹೇಗೊ ನಾನು ಅರಿಯೆ
ಯಾವ ಕ್ಷಣವು ಹೇಗೊ ಕಾಣೆ
ಹೀಗೇಕೆ ನಾನಾದೆ ಒಂದು ಅರಿಯೆನು
ಯಾವ ಜನ್ಮ ಬಂಧವಿದು
ಯಾರ ಪುಣ್ಯ ಏನೊ ಕಾಣೆ
ನೀ ಬಂದೆ ಬಾಳಿನಲ್ಲಿ ನಿನ್ನ ನಾನು ಸೇರುವೆ
ಸರಿದ ಸಮಯ ತಾ ಬಾರದೆಂದಿಗು
ಮಧುರ ಕ್ಷಣವ ನಾ ಮರೆಯೆ ಎಂದಿಗು

ನೆನಪುಗಳ ಅಂಗಳದಿ ನಿನ್ನ ನಗೆಯ ತುಂಬಿಕೊಂಡ ಬೆಳದಿಂಗಳು ಬೆಳದಿಂಗಳು



*** Kannda  Old Song Lyrics ***

Desda Katha Song Lyrics

ದೇಶದ್ ಕಥೆ ಇಷ್ಟೇ ಕಣಮ್ಮೋ..

ಸಂಗೀತ ಸಾಗರ-ಸಾಹಿತ್ಯ ಸರೋವರ


ನಾದ ಬ್ರಹ್ಮ-ಹಂಸಲೇಖ ಸರ್

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ಮುಂದೆ ಹೋಗಿ ಹಿಂದೆ ಬರೋ

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ಮುಂದೆ ಹೋಗಿ ಹಿಂದೆ ಬರೋ

ಮುಂದೆ ಹೋಗಿ ಹಿಂದೆ ಬರೋ

ದೇಶದ್ ಕಥೆ ಇಷ್ಟೇ ಕಣಮ್ಮೋ..

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ಸರ್ಕಾರಿ ಬಟ್ಟೆ ಧರಿಸೋಕೆ ಅಷ್ಟೇ..

ಗಟ್ಟಿಯಾಗಿ ಮಾತನಾಡಬೇಡ ತಪ್ಪು,

ನಿಷ್ಠೆ ಹೊರಗೆ ತೋರಬೇಡ ತಪ್ಪು,

ಬಂದೂಕು ಹೊರಗೆ ಸೆಲ್ಯುಟು ತಲೆಗೆ

ಸತ್ಯ ಒಡೆದು ಹೇಳಬೇಡ ತಪ್ಪು

ಕಳ್ಳ ಜಾಲವನ್ನು ಹಿಡಿಯಬೇಡ ತಪ್ಪು..

ಸರಿ ಇಲ್ಲಿ ತಪ್ಪು ತಪ್ಪೆ ಇಲ್ಲಿ ಒಪ್ಪು

ಸರಿ ಇಲ್ಲಿ ತಪ್ಪು ತಪ್ಪೆ ಇಲ್ಲಿ ಒಪ್ಪು

ಸರಿ ತಪ್ಪು ಗೊತ್ತಿಲ್ದಿರೋ

ದೇಶದ್ ಕಥೆ ಇಷ್ಟೇ ಕಣಮ್ಮೋ

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ

ಈ ದೇಶದ್ ಕಥೆ ಇಸ್ಜ್ತೆ ಕಣಮ್ಮೋ

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ಚಮಚಾಗೆ ಚಾಲ್ತಿ ರಾಜೀಗೆ ಬಡ್ತಿ

ತುಟಿ ಬತ್ಯಕಾಗಿ ಮಾನ ಹಾಳು ಕೇಳು

ಕೊಂಚ ಲಂಚದಿಂದ ದೇಶ ಹಾಳು ಕೇಳು

ಮಹಾರಾಜ ಹೋದ ಮಹನೀಯ ಬಂದ

ಶಾಂತಿ ಎಂದ ಗಾಂಧಿಯನ್ನೇ ಕೊಂದ ನಂಬು..

ಓಟು ಕೊಟ್ಟ ಚಿಂದಿ ಬಟ್ಟೆ ಕೈಗೆ ಚಂಬು..

ನ್ಯಾಯ ನೋಡೋ ಕಣ್ಣು ಅಯ್ಯೋ ನೀನು ಹೆಣ್ಣು

ನ್ಯಾಯ ನೋಡೋ ಕಣ್ಣು ಅಯ್ಯೋ ನೀನು ಹೆಣ್ಣು

ಎದ್ದು ಚಂಡಿ ಆಗೋವರೆಗೂ

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ಮುಂದೆ ಹೋಗಿ ಹಿಂದೆ ಬರೋ

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ಕಣಮ್ಮೋ ಕಣಮ್ಮೋ..ಹೊಯ್..

*** Kannda Old  Song Lyrics ***

Aaruliva huvagi Nannu Song Lyrics

ಹೆಣ್ಣಿನ ಸೌಭಾಗ್ಯ(1984) - ಅರಳಿರುವೆ ಹೂವಾಗಿ ನಾನು

ಸಂಗೀತ: ಉಪೇಂದ್ರ ಕುಮಾರ್
ಗಾಯನ:
ಎಸ್. ಜಾನಕಿ

ಅರಳಿರುವೆ ಹೂವಾಗಿ ನಾನು
ತನು ಮನ ಸವಿಯಾದ ಜೇನು ... ೨

ಒಲವು ಮೂಡುತ ಚೆಲುವ ತೋರುತ
ತನು ತೇಲಾಡಿ ಮೀಯುತಲಿ ಮಾಗಿದೆ
ಮನ ಹಾರಾಡಿ ಬೀಗುತಲಿ ಹಾಡಿದೆ
ತನು ತೇಲಾಡಿ ಮೀಯುತಲಿ ಮಾಗಿದೆ
ಮನ ಹಾರಾಡಿ ಬೀಗುತಲಿ ಹಾಡಿದೆ

ಅರಳಿರುವೆ ಹೂವಾಗಿ ನಾನು
ತನು ಮನ ಸವಿಯಾದ ಜೇನು

ಹೊಳೆಯುವ ನೋಟ
ಬಳುಕುವ ಮಾಟ
ಅಲೆಗಳ ಓಟ
ತೀರದ ಆಟ

ಮನಸಿನ ಭಾವ ಹೃದಯದ ಜೀವ
ಅರಿಯದ ಮೋಹ ತಂದಿದೆ ನೋವ
ತಂಗಾಳಿ ಹೂಬಳ್ಳಿ ತೀಡಿ
ನೀವು ನನ್ನಂದ ಹೇಗೆಂದು ಹೇಳಿ
ತಂಗಾಳಿ ಹೂಬಳ್ಳಿ ತೀಡಿ
ನೀವು ನನ್ನಂದ ಹೇಗೆಂದು ಹೇಳಿ
ತನು ತೇಲಾಡಿ ತನು ತೇಲಾಡಿ ಮೀಯುತಲಿ ಮಾಗಿದೆ
ಮನ ಹಾರಾಡಿ ಬೀಗುತಲಿ ಹಾಡಿದೆ

ಅರಳಿರುವೆ ಹೂವಾಗಿ ನಾನು
ತನು ಮನ ಸವಿಯಾದ ಜೇನು

ಮುಗಿಲಿನ ಬಣ್ಣ ನವಿಲಿನ ಕಣ್ಣ
ಚಿಲಿಪಿಲಿ ಗಾನಾ ಕೂಡಿದೆ ನನ್ನ
ಕನಸಿನ ಆಸೆ ಕಲರವ ಭಾಷೆ
ಮಿಡಿದಿದೆ ನನ್ನ ತೋಳಿನ ಗೀತೆ
ಬಾನಾಡಿ ಬಾನಲ್ಲಿ ತೇಲಿ
ಬಂದು ನನ್ನಂದ ಹೇಗೆಂದು ಹೇಳಿ
ತನು ತೇಲಾಡಿ ತನು ತೇಲಾಡಿ ಮೀಯುತಲಿ ಮಾಗಿದೆ
ಮನ ಹಾರಾಡಿ ಬೀಗುತಲಿ ಹಾಡಿದೆ

ಅರಳಿರುವೆ ಹೂವಾಗಿ ನಾನು
ತನು ಮನ ಸವಿಯಾದ ಜೇನು


*** Kannda Old Song Lyrics ***

Sangya Bhalya - Ganethna Gamathu Song Lyrics

ಸಂಗ್ಯಾ ಬಾಳ್ಯಾ(1992) - ಗೆಣೆತಾನ ಗಮ್ಮತ್ತ್

ಸಂಗೀತ: ವಿಜಯಭಾಸ್ಕರ್

ಗೆಣೆತನ ಗಮ್ಮತ್ತ್ ಹಿಂಗ ಐತಂತ
ತಿಳಿಯೊದಿಲ್ಲಾ ತಮ್ಮಾ ಸರಳ
ಹೌದೇನ
ಹೇ ಗೆಣೆತನ ಗಮ್ಮತ್ತ್ ಹಿಂಗ ಐತಂತ
ತಿಳಿಯೊದಿಲ್ಲಾ ತಮ್ಮಾ ಸರಳ
ತಳ ಅಂಬುದು ಸಿಗುವುದಿಲ್ಲಾ
ಬಗ್ದಷ್ಟು ಐತಿ ಕೇಳಿದರಾಳ
ಗೀಯ ಗಾ ಗಾಗಿಯ ಗಾ ಗೀ
ಹೇ ತಳ ಅಂಬುದು ಸಿಗವುದಿಲ್ಲಾ
ಬಗ್ದಷ್ಟು ಐತಿ ಕೇಳಿದರಾಳ
ಗೀಯ ಗಾ ಗಾಗಿಯ ಗಾ ಗೀ

ತುದಿಗಾಲ ಮ್ಯಾಲ್ ನಿಂತ
ಇದ ಬೇಕ್ ಅಂತ್ ಹೇಳಿದ್ರ್ ಸಾಕು ಗೆಣೆತಾನಕ್ಕ್
ಹೇಂಗಪ್ಪಾ
ಹೇ ತುದಿಗಾಲ ಮ್ಯಾಲ್ ನಿಂತ
ಇದ ಬೇಕ್ ಅಂತ್ ಹೇಳಿದ್ರ್ ಸಾಕು ಗೆಣೆತಾನಕ್ಕ್
ಏಳ್ ಸಮುದ್ರ ದಾಟೆ ಇದ್ದರು
ಬಂದ್ ಸೇರತೈತಿ ನಿನ ತನಕ
ಗೀಯ ಗಾ ಗಾಗಿಯ ಗಾ ಗೀ
ಹೇ ಏಳ್ ಸಮುದ್ರ ದಾಟೆ ಇದ್ದರು
ಬಂದ್ ಸೇರತೈತಿ ನಿನ ತನಕ
ಗೀಯ ಗಾ ಗಾಗಿಯ ಗಾ ಗೀ

ಜಾತಿ ಗೋತ್ರ ಕುಲ ಕೇಳೊ ಮಾತೆ ಇಲ್ಲಾ ಏಕತ್ರ ಎಲ್ಲಾ ಇದ್ರವೊಳಗ
ಅದ್ ಹೇಂಗ
ಹೇ ಜಾತಿ ಗೋತ್ರ ಕುಲ ಕೇಳೊ ಮಾತೆ ಇಲ್ಲಾ ಏಕತ್ರ ಎಲ್ಲಾ ಇದ್ರವೊಳಗ
ಬಡವ ಬಲ್ಲಿದ ಯಾರ ಕೇಳತಾರ
ಪ್ರೀತಿ ಎಂಬುದೈತಿದರೊಳಗ
ಗೀಯ ಗಾ ಗಾಗಿಯ ಗಾ ಗೀ
ಹೇ ಬಡವ ಬಲ್ಲಿದ ಯಾರ ಕೇಳತಾರ
ಪ್ರೀತಿ ಎಂಬುದೈತಿದರೊಳಗ
ಗೀಯ ಗಾ ಗಾಗಿಯ ಗಾ ಗೀ

ಕೊಡತತ್ತ್ ಕೊಳುದ್ ನಡದ್ ಇದ್ದರು ವ್ಯಾಪಾರ ಅಲ್ಲಿದು ಗೆಣೆತಾನ
ಹೇಂಗಪ್ಪಾ
ಹೇ ಕೊಡ್ತತ್ತ್ ಕೊಳುದ್ ನಡದ್ ಇದ್ದರು ವ್ಯಾಪರ ಅಲ್ಲಿದು ಗೆಣೆತಾನ
ಗೆಣೆತಾನ ಕೆಚ್ಚಲಕ್ಕ್ ಬರ ಅಂಬುದಿಲ್ಲಾ
ಒಂದಕ್ಕಿರುವುದೊಂದರ ಧ್ಯಾನ
ಗೀಯ ಗಾ ಗಾಗಿಯ ಗಾ ಗೀ
ಹೇ ಗೆಣೆತಾನ ಕೆಚ್ಚಲಕ್ಕ್ ಬರ ಅಂಬುದಿಲ್ಲಾ
ಒಂದಕ್ಕಿರುವುದೊಂದರ ಧ್ಯಾನ

ಹಾಲ್ನಾಗ ಸಕ್ರಿ ಕುಡಿ ಸಿಮಿ ಏನೋ ಆಗ್ತೈತಿ
ಕುಡಿದು ಕಣ್ಣಿಗೆ ಕಾಣುವುದಿಲ್ಲಾ
ಹಿಂಗೇನಾ
ಹೇ ಹಾಲ್ನಾಗ ಸಕ್ರಿ ಕುಡಿ ಸಿಮಿ ಏನೋ ಆಗ್ತೈತಿ
ಕುಡಿದು ಕಣ್ಣಿಗೆ ಕಾಣುವುದಿಲ್ಲಾ
ಗೆಣೆತಾನ ಮನಸೆರಡು ಬೆಸದಿರು ತಿಳುವಳ್ಕಿ
ಬರುತೈತಿ ಅದು ಅನುಭವ ಮ್ಯಾಲ
ಗೀಯ ಗಾ ಗಾಗಿಯ ಗಾ ಗೀ
ಹೇ ಗೆಣೆತಾನ ಮನಸೆರಡು ಬೆಸದಿರು ತಿಳುವಳ್ಕಿ
ಬರುತೈತಿ ಅದು ಅನುಭವ ಮ್ಯಾಲ
ಗೀಯ ಗಾ ಗಾಗಿಯ ಗಾ ಗೀ


*** Kannada  Old Song Lyrics ***

LinkWithin

Related Posts with Thumbnails
free counters